ಶಂಕರಾನಂದ ಹೆಬ್ಬಾಳ-ತನಗಗಳು

ಕಾವ್ಯ ಸಂಗಾತಿ

ತನಗಗಳು

ಶಂಕರಾನಂದ ಹೆಬ್ಬಾಳ

ನೀನೊಮ್ಮೆ ಮನಬಿಚ್ಚಿ
ಹೃದಯದಿ ಮಾತಾಡು
ಪ್ರೀತಿಸಿದ ಜೀವವ
ಬಿಡದಂತೆ ಕಾಪಾಡು

ಕಣ್ಣಿಗೆ ರೆಪ್ಪೆಯಂತೆ
ಜೊತೆಯಾಗಿ ಇರುವೆ
ಎದೆಯಲಿ ಪ್ರೇಮದ
ಹೊನಲಾಗಿ ಹರಿವೆ

ನನ್ನೆದೆಯ ಆಳದಿ
ಮಿಂಚೊಂದು ಮೂಡುತಿದೆ
ಪ್ರೇಮದಾ ಗೀತೆಯನು
ತೋಷದಿ ಹಾಡುತಿದೆ

ಒಲವಿನ ಗೀತೆಗೆ
ಮುನ್ನುಡಿಯ ಬರೆದೆ
ಹೃದಯದ ಬಾಗಿಲ
ಛಲತೊಟ್ಟು ತೆರೆದೆ


Leave a Reply

Back To Top